ಶುಕ್ರವಾರ, ಜುಲೈ 22, 2011

'ದಲಿತ ಪೀಠಾಧಿಪತಿ' ಕೃತಿಗೆ ಕಸಾಪ ಪ್ರಶಸ್ತಿ




     ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರಿನ 
2011 ನೇ ಸಾಲಿನ 'ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ' 
ನನ್ನ (ಮಾಣಿಕ ಆರ್.ಭುರೆ) 2010 ರಲ್ಲಿ 
ಪ್ರಕಟವಾದ 
(ಪ್ರಕಾಶಕರು- ಶರಣ ಉರಿಲಿಂಗಪೆದ್ದಿ ಮಠ ಟ್ರಸ್ಟ್ ಬೇಲೂರು) 
ಕೃತಿ `ದಲಿತ ಪೀಠಾಧಿಪತಿ'ಗೆ ದೊರೆತಿರುವುದು 
ನನಗೆ ಅತೀವ ಸಂತಸ ತಂದ ವಿಷಯ.
 28 ನೇ ಏಪ್ರಿಲ್ 2011 ರಂದು 
ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ 
ಶ್ರೀಕೃಷ್ಣರಾಜ ಭವನದಲ್ಲಿ 
ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.      
     ಹೆಸರಾಂತ ಕವಿ ಬಿ.ಆರ್.ಲಕ್ಷ್ಮಣರಾವ 
ಸಮಾರಂಭ ಉದ್ಘಾಟಿಸಿದರು.
ಜಯನಗರ ಕ್ಷೇತ್ರದ ಶಾಸಕ ವಿಜಯಕುಮಾರ, 
ರಾಜ್ಯ ಸುಗಮ ಸಂಗೀತ ಅಕಾಡೆಮಿ ಅಧ್ಯಕ್ಷ 
ವೈ.ಕೆ.ಮುದ್ದುಕೃಷ್ಣ, 
ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷ 
ಡಾ.ನಲ್ಲೂರುಪ್ರಸಾದ, 
ಗೌರವ ಕೋಶಾಧ್ಯಕ್ಷ ಪುಂಡಲೀಕ್ ಹಾಲಂಬಿ, 
ಗೌರವ ಕಾರ್ಯದರ್ಶಿ ಪ್ರೊ.ಎಚ್.ಕೆ.ಮಳಲಿಗೌಡ, ಸಂಗಮೇಶ ಬಾದವಾಡಗಿ ಪಾಲ್ಗೊಂಡಿದ್ದರು.
  
 ಈ ಸಂದರ್ಭದಲ್ಲಿ ನನ್ನನ್ನೊಳಗೊಂಡು 31 ಜನರಿಗೆ 
ವಿವಿಧ ದತ್ತಿ ಪ್ರಶಸ್ತಿಗಳನ್ನು ಕೊಟ್ಟು ಸನ್ಮಾನಿಸಲಾಯಿತು. ಪ್ರಶಸ್ತಿಯ ಹೆಸರು, ಕೃತಿ ಮತ್ತು ಪಡೆದವರ ಹೆಸರುಗಳು ಮುಂದಿನಂತಿವೆ.


1) ಮಲ್ಲಿಕಾ ಪ್ರಶಸ್ತಿ ದತ್ತಿ (ನಾನೇನೂ ಅಲ್ಲ) 
    -ಕುಲಶೇಖರಿ
2) ಅಂತಾರಾಷ್ಟ್ರೀಯ ಮಹಿಳಾ ವರ್ಷದ ಪ್ರಶಸ್ತಿ (ಯೋಗಕ್ಷೇಮ) 
    - ಡಾ.ಕೆ.ಎಸ್.ಚೈತ್ರಾ
3) ಶ್ರೀಮತಿ ಶಾರದಾ ರಾಮಲಿಂಗಪ್ಪ ದತ್ತಿ ಪ್ರಶಸ್ತಿ (ಜಲದ ಮಂಟಪದ ಮೇಲೆ)
    - ಜ್ಯೋತಿ ಬಿ.ಕುಲಕರಣಿ
4) ಲಲಿತಾದೇವಿ ಗುರುಸಿದ್ಧಪ್ಪ ಸಿಂಧೂರ ದತ್ತಿ (ಪ್ರೇಮ ಸಿಂಚನ)
    -ಲತಾ ಶ್ರೀಧರ
5) ನೀಲಗಂಗಾ ದತ್ತಿ ಪ್ರಶಸ್ತಿ (ಕವಿತೆ ಬರೆಯಲೆ ನಾನು) 
    - ಶಾರದಾ ವಿ.ಮೂರ್ತಿ
6) ಶ್ರೀಮತಿ ಕೆ.ಎಸ್.ಭಾರತಿ ರಾಜಾರಾಮ ಮಧ್ಯಸ್ಥ ದತ್ತಿ (ಕಥೆಯಲ್ಲ ಬದುಕು) 
    - ಯಶೋಧ ಚೆನ್ನಿ
7) ಶಾರದಾ ಆರ್.ರಾವ ದತ್ತಿ (ಮನ -ಮನನ) 
     - ಡಾ.ಕೆ.ಎಸ್.ಪವಿತ್ರ
8) ಗೌರಮ್ಮ ಹಾರ್ನಳ್ಳಿ ಕೆ.ಮಂಜಪ್ಪ ದತ್ತಿ ಪ್ರಶಸ್ತಿ (ಅವಲೋಕನ) 
    -ರತ್ನಶೀಲಾ ಗುರಡ್ಡಿ
9) ಎಚ್.ಕರಿಯಣ್ಣ ದತ್ತಿ ಪ್ರಶಸ್ತಿ (ಎಷ್ಟು ಬಣ್ಣ ಇರುಳು) 
     -ಮುದ್ದು ತೀರ್ಥಹಳ್ಳಿ
10) ಡಾ.ಎಚ್.ನರಸಿಂಹಯ್ಯ ದತ್ತಿ ಪ್ರಶಸ್ತಿ (ಇದೂ ಸಾಧ್ಯ) 
     -ಹುಲಿಕಲ್ ನಟರಾಜ್
11) ಅಸುಂಡಿ ಹುದ್ದಾರ ಕೃಷ್ಣರಾವ ಸ್ಮಾರಕ ದತ್ತಿ ಪ್ರಶಸ್ತಿ (ದಾಸ ಸಾಹಿತ್ಯ ಭಾಷೆ)
     -ಡಾ.ಎಸ್.ಎಸ್.ಅಂಗಡಿ
12) ಜಿ.ಪಿ.ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ (ಮಕ್ಕಳಿಗಾಗಿ ನೀತಿಕತೆಗಳು)
      -ಪ.ರಾಮಕೃಷ್ಣಶಾಸ್ತ್ರೀ
13) ಶ್ರೀಮತಿ ಕೆ.ವಿ.ರತ್ನಮ್ಮ ದತ್ತಿ ಪ್ರಶಸ್ತಿ (ಕಾವ್ಯಸುಧೆ)  
     -ಸುಧಾ ಭ.ಮರಿಗೌಡ್ರ
14) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಗದ್ಯಕೃತಿ(ಇಸ್ಲಾಮಿನ ಇತಿಹಾಸ) 
      -ಪಿ.ಕೆ.ಶಂಷುದ್ದೀನ್
15) ರತ್ನಾಕರವರ್ಣಿ ಮುದ್ದಣ್ಣ ಅನಾಮಿಕ ದತ್ತಿ -ಪದ್ಯಕೃತಿ(ಹಾರಯಿಕೆ)
      - ವಸಂತ ಕುಷ್ಟಗಿ
16) ಪಿ.ಶಾಂತಿಲಾಲ ದತ್ತಿ ಪ್ರಶಸ್ತಿ(ಜಿನದನಿ) 
     -ಡಿ.ಎನ್.ಅಕ್ಕಿ
17) ಅಕ್ಕಮ್ಮ ಗಿರಿಗೌಡ ರುದ್ರಪ್ಪ ದತ್ತಿ ಪ್ರಶಸ್ತಿ (ಹೊನ್ನ ಬಿತ್ಯಾರ ಹೊಲಿಸಾಲ)
      -ಬಸವರಾಜ ಆಕಳವಾಡಿ
18) ಶ್ರೀಮತಿ ಜಯಲಕ್ಷ್ಮಮ್ಮ ಬಿ.ಎಸ್.ಸಣ್ಣಯ್ಯ ದತ್ತಿ ಪ್ರಶಸ್ತಿ(ಪುರಾಣ ಪುರುಷ ರತ್ನಗಳು)
     -ವಿಜಯಾ ಸುಬ್ರಹ್ಮಣ್ಯ
19) ಕುಂಬಾಸ ದತ್ತಿ ಪ್ರಶಸ್ತಿ(ನಗೆ ನಗಾರಿ)
      -ಜೀಜೀ(ಗಣೇಶ ಪ್ರಸಾದ)
20) ಪ್ರೊ.ಡಿ.ಸಿ.ಅನಂತಸ್ವಾಮಿ ಸಂಸ್ಮರಣ ದತ್ತಿ ಪ್ರಶಸ್ತಿ(ಕದಡದಿರಿ ತಿಳಿನೀರ ಕೊಡ)
      -ಡಾ.ವಿ.ಬಿ.ರಡ್ಡೇರ್
21) ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ(ದಲಿತ ಪೀಠಾಧಿಪತಿ) 
      -ಮಾಣಿಕ ಆರ್.ಭುರೆ
22) ಸಿಸು ಸಂಗಮೇಶ ದತ್ತಿ ಪ್ರಶಸ್ತಿ(ಹಲೋ ಹಲೋ ಚಂದಮಾಮ) 
      -ರಾಧೇಶ ತೋಲ್ಪಾಡಿ
23) ಪಂಪಮ್ಮ ಶರಣೇಗೌಡ ವಿರುಪಾಪುರ ದತ್ತಿ ಪ್ರಶಸ್ತಿ(ಬಾಳು ಬೆಳಗಿದವರು) 
      -ಶರಣಪ್ಪ ಗುಡದಿನ್ನಿ
24) ಕೆ.ಎಸ್.ವಾಸುದೇವಾಚಾರ್ ದತ್ತಿ (ಕಾಲುದಾರ
       - ದವನ ಸೊರಬ
25) ಡಾ.ಆರ್.ಜೆ.ಗಲಗಲಿ ದತ್ತಿ ಪ್ರಶಸ್ತಿ(ಬಣ್ಣದ ಚಿಟ್ಟೆ) 
      -ಆರ್.ಎಸ್.ಚಾಪಗಾವಿ
26) ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲಶೆಟ್ಟಿ ಡಾ.ಮದನಕೇಸರಿ 
      ಜೈನ್ ದತ್ತಿ( ನಿಕಷ-1) -ಡಾ.ಎಸ್.ಪಿ.ಪದ್ಮಪ್ರಸಾದ
27) ವಸುದೇವ ಭೂಪಾಲಂ ದತ್ತಿ ಪ್ರಶಸ್ತಿ- ಕಾದಂಬರಿ(ನಮ್ಮೂರ ಓಣಿಯ) 
      -ಬಶೀರ ಅಹ್ಮದ್
28)   "   ಕಾದಂಬರಿ (ಹೃದಯದ ಸದ್ದುಗಳು) 
       -ಹೊಸಮನಿ
29)   "  ಸಣ್ಣಕತೆ (ಪ್ರಕೃತಿಯ ನೆರಳಲ್ಲಿ) 
       -ಹೊನ್ನಶೆಟ್ಟಿಹಳ್ಳಿ ಗಿರಿರಾಜ್
30)   "  ಮಕ್ಕಳ ಸಾಹಿತ್ಯ (ಚಿಂಪಿ) 
        -ಮುಮ್ತಾಜ್ ಬೆಗಂ
31)   "  ಅನುವಾದಿತ/ವೈಚಾರಿಕ ಕೃತಿ (ಮಂತಣ) 
        -ಡಾ.ಅರ್ಜುನಪುರಿ  ಅಪ್ಪಾಜಿಗೌಡ್
         -------------------------------------------
 'ದಲಿತ ಪೀಠಾಧಿಪತಿ' ಪುಸ್ತಕದ ಬಗ್ಗೆ ಡಾ.ಜಿ.ಬಿ.ವಿಸಾಜಿ ಅಭಿಪ್ರಾಯ


      `ದಲಿತ ಪೀಠಾಧಿಪತಿ' ಕೃತಿಯ ಬಗ್ಗೆ ಬೀದರ ಜಿಲ್ಲೆಯ ಹಿರಿಯ ಸಾಹಿತಿಗಳು, 
ನಿವೃತ್ತ ಉಪನ್ಯಾಸಕರಾದ ಡಾ.ಜಿ.ಬಿ.ವಿಸಾಜಿ ಅವರು ಪತ್ರ ಬರೆದು 
ತಿಳಿಸಿದ ಅಭಿಪ್ರಾಯ ಹೀಗಿದೆ.....
                                                    ಭಾಲ್ಕಿ
                                                  16-7-2011
   ` ಆತ್ಮೀಯರೆ, ತಾವು ಪ್ರೀತಿಯಿಂದ ಕೊಟ್ಟ `ದಲಿತ ಪೀಠಾಧಿಪತಿ' 
ಪುಸ್ತಕ ಓದಿ ಮುಗಿಸಿದೆ. 
ಪೂಜ್ಯ ಪಂಚಾಕ್ಷರಿ ಸ್ವಾಮಿ ಪರಿಚಯವಷ್ಟೇ ಇರಬಹುದೆಂದು 
ತಿಳಿದಿದ್ದೆ. ಆದರೆ 1) ಶೂದ್ರವರ್ಣದ ಬಗ್ಗೆ ಸತ್ಯಾನ್ವೇಷಣೆ 
2)ಜನರೆಡೆಗೆ ದೇವರು 3)ಸತ್ಯಶೋಧಕ ಸಮಾಜ 4)ಬಸವಯುಗ
 5) ದಲಿತ ಪೀಠಾಧಿಪತಿ 6)ಬೇಲೂರು, ಉರಿಲಿಂಗಪೆದ್ದಿ 
ಸಂಬಂಧ ಮತ್ತು ಪರಂಪರೆ 
7) ಬಸವಕಲ್ಯಾಣದ ಶರಣ ಸ್ಥಳಗಳು ಮತ್ತು ಅಭಿವೃದ್ಧಿ 
8) ಗ್ರಂಥಋಣ 9) ಚಿತ್ರಗಳು ಪುಸ್ತಕದ ಘನತೆಯನ್ನು ಹೆಚ್ಚಿಸಿವೆ. 
ಎಲ್ಲಿಯೂ ಸ್ವಹಿತಾಸಕ್ತಿಯಾಗಲಿ, 
ಪೂರ್ವಾಗ್ರಹಪೀಡಿತತನವಾಗಲಿ ಕಾಣಲಿಲ್ಲ. 
ಬರವಣಿಗೆಯಲ್ಲಿ ಖಚಿತತೆ, ನಿಖರತೆ, ಪ್ರಾಮಾಣಿಕತೆ 
ನಿಚ್ಚಳವಾಗಿ ಕಾಣುತ್ತದೆ. 
ಇದಕ್ಕೂ ಹಿರಿದಾದ ಪುಸ್ತಕ ರಚನೆಗೆ ಸಿದ್ಧರಾಗಿ 
ನಮ್ಮ ಸಂತೋಷವನ್ನು ಹೆಚ್ಚಿಸಿರಿ. 
ವಂದನೆಗಳು.
                                     ತಮ್ಮ ವಿಶ್ವಾಸಿ
                                     ಜಿ.ಬಿ.ವಿಸಾಜಿ
                              ------------ -------------

ಪ್ರಶಸ್ತಿ ಬಂದಿದಕ್ಕಾಗಿ ಸಂಘಟನೆಗಳ ಒಕ್ಕೂಟದಿಂದ ಸನ್ಮಾನ
  
     2ನೇ ಮೇ 2011 ರಂದು ಬಸವಕಲ್ಯಾಣದ ಕಲ್ಯಾಣ ಮಂಟಪದಲ್ಲಿ ವಿವಿಧ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡಿದ ಮೂವರು ಹಿರಿಯರ ಜತೆ `ದಲಿತ ಪೀಠಾಧಿಪತಿ' ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿ.ಆರ್.ರೇವಯ್ಯ ದತ್ತಿ ಪ್ರಶಸ್ತಿ ಬಂದಿದಕ್ಕಾಗಿ ನನ್ನನ್ನು(ಮಾಣಿಕ ಭುರೆ) ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬಸವಕಲ್ಯಾಣದ ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ಸ ರಕಾರಿ ಪದವಿ ಕಾಲೇಜಿನ ಪ್ರಾಚಾರ್ಯ ನಾಗೇಂದ್ರ ಢೋಲೆ ಅವರ 
ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
    ರಾಜ್ಯ ಸರಕಾರದ `ಡಾ.ಬಿ.ಆರ್.ಅಂಬೇಡ್ಕರ ಪ್ರಶಸ್ತಿ' ಪುರಸ್ಕೃತರಾದ ಪ್ರಸಿದ್ಧ ನ್ಯಾಯವಾದಿ ತಾತೇರಾವ ಕಾಂಬಳೆ, `ಡಾ.ಬಾಬು ಜಗಜೀವನರಾಮ ಪ್ರಶಸ್ತಿ' 
ಪಡೆದ ಮಾಜಿ ವಿಧಾನ ಪರಿಷತ್  ಸದಸ್ಯ ಮಾರುತಿರಾವ ಡಿ.ಮಾಲೆ, 11 ನೇ ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ಪತ್ರಕರ್ತ ಶಿವಶರಣಪ್ಪ ವಾಲಿ ಅವರು ಇತರೆ ಸನ್ಮಾನಿತರಾಗಿದ್ದಾರೆ.
     ಕೌಠಾ ಬಸವಯೋಗಾಶ್ರಮದ ಬೆಲ್ದಾಳ ಸಿದ್ಧರಾಮ ಶರಣರು ನೇತೃತ್ವ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪಂಚಾಕ್ಷರಿ ಹಿರೇಮಠ, ಧರಿನಾಡು ಕನ್ನಡ ಸಂಘದ ಅಧ್ಯಕ್ಷ ಜೈಶೇನ ಪ್ರಸಾದ, ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಈಶ್ವರ ಹೆಬ್ಬಾಳಕರ್, ಜಾನಪದ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಶಾಂತಲಿಂಗ ಮಠಪತಿ, ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮಂಠಾಳಕರ್, ಲೋಹಿಯಾ ಪ್ರತಿಷ್ಠಾನದ ಅಧ್ಯಕ್ಷ ಬಸವರಾಜ ಸಿಂಧೆ, ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಧನರಾಜ ರಾಜೋಳೆ, ಕಲ್ಯಾಣ ಕನ್ನಡ ಸಂಘದ ಅಧ್ಯಕ್ಷ ನಾಗೇಂದ್ರ ಬಿರಾದಾರ, ಗಮಕ ಕಲಾ ಪರಿಷತ್ತಿನ ಅಧ್ಯಕ್ಷ ದಶವಂತ ಬಂಡೆ, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಚಿತ್ರಶೇಖರ ಚಿರಳ್ಳಿ, ಸಂಗೀತ ಕಲಾ ಪರಿಷತ್ತಿನ ಅಧ್ಯಕ್ಷ ಶೇಷಪ್ಪ ಗಬ್ಬೂರ್ ಉಪಸ್ಥಿತರಿದ್ದರು.
    ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಡಾ.ಗವಿಸಿದ್ಧಪ್ಪ ಪಾಟೀಲ ಸ್ವಾಗತಿಸಿದರು. ಉಪನ್ಯಾಸಕಿ ಶಿವಲೀಲಾ ಮಠಪತಿ ನಿರೂಪಿಸಿದರು. ಬರಹಗಾರರ ಸಂಘದ ಅಧ್ಯಕ್ಷ ಭೀಮಾಶಂಕರ (ಬಸವ) ಬಿರಾದಾರ ವಂದಿಸಿದರು.
                          ------------------  


ಕಾಮೆಂಟ್‌ಗಳಿಲ್ಲ: